ಎಪ್ಪತ್ತೊಂದು
ನಷ್ಟವಾಗುವ ಕಾಯಕ್ಕೆ| ಇಷ್ಟು ಹಂಬಲವೇತಕ್ಕೊ|
ಸೃಷ್ಟಿಗೊಡೆಯ ಶ್ರೀಕೃಷ್ಣನ | ಇಷ್ಟದಿಂದ ಭಜಿಸೊ ಮನವೆ || ಪ ||
ಸೃಷ್ಟಿಗೆ ಬಂದಿಹ ಮೇಲೆ ಬಲು| ಕಷ್ಟವೆನಲು ಬೇಡ ಮುದ್ದು|
ಕೃಷ್ಣನ ನೆನೆಯುತ ಸುಖ ಸಂ|ತುಷ್ಟಿಯ ಪಡೆಯೊ ನೀ ಮನವೆ|ಅ.ಪ||
ಅಲ್ಪತನ ಬಿಟ್ಟು ಸಾಗರ | ತಲ್ಪ ಶ್ರೀರಂಗ ಶಯನನ |
ಸ್ವಲ್ಪದಿಂದ ನೆನೆದರೂ | ಎಲ್ಲ ಕಾಮನೆ ಸಲಿಸಿ ವರ |
ಕಲ್ಪತರುವಿನ ತೆರದಿ ತಾ | ನೆಲ್ಲರ ಕಾಯುವೆನೆಂದು |
ನಿಲ್ಲದೆ ನಿರತದಿ ಹರಿ ತಾ| ನೊಳ್ಳಿತ ಮಾಡುವ ಕಾಣಿರೊ||ನಷ್ಟ||
ಅಗ್ಗವಾದ ಜೀವನಕ್ಕೆ | ಒಗ್ಗಿಕೊಂಡು ಬಹಳ ಬಳಲಿ |
ಮಗ್ಗುಲಿಗೆ ಹೊರಳಿಕೊಂಡು ನಿ | ತಗ್ಗಿನೊಳಗೆ ಬಿದ್ದೆಯಲ್ಲೊ|
ಕೊಗ್ಗತನ ತೋರದಲೆ ಶಿರ | ಬಗ್ಗಿ ಹರಿಯ ಪದ ಜಪಿಸಲು |
ಹಿಗ್ಗುತಲಿ ಪರಮ ಗತಿ ತಾ |ನೆಗ್ಗಿಲ್ಲದೆ ಕರುಣಿಸುವನು ||ನಷ್ಟ||
ಗದ್ದಿಗೆಗೆ ಆಸೆವಡೆಯುತ | ಕದ್ದು ಕನಕವ ಕೂಡಿಟ್ಟು |
ಬಿದ್ದು ನರಕದಿ ಕೆಟ್ಟೆನೈ | ಮುದ್ದು ಮುಖ ಮಂದಹಾಸನೆ|
ಬದ್ದನಾಗಿ ನಿನ್ನ ನೆನೆಯೆ | ಹದ್ದನೇರುತ ಬಳಿ ಬಂದು |
ಉದ್ದರಿಸಿ ಸಲಹಲು ಬೇಕು | ಸಿದ್ಧ ಮಾತರೀಶ ವಿಠಲ ||ನಷ್ಟ||
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ