ಒಂದು
ಗುರಿತೋರಿ ನಡೆಸುವರಿನ್ನೇತರರ ಕಾಣೆನೊ ಹರಿಯೇ.||ಪ||
ಕರುಣಾಕರ ನೀನೊಬ್ಬನೇ ಜಗದಿ ಇರಲಾಗಿ.||ಅ.ಪ||
ನೂರು ವರುಷವ ನೀನಿತ್ತರೆ
ಯಾರು ಎನ್ನ ಒಯ್ಯಲಾರರೊ
ಮೂರು ದಿನವಿತ್ತಿರಲು ಜಗದಿ
ಸಾರಿ ಉಳಿಸಿದವರನು ತೋರು||ಗುರಿತೋರಿ||
ಅರಸನಾಗುವ ಮನವಿದ್ದಡೆ
ಆರೆನಿತು ನಿಲ್ಲಿಸುವರಯ್ಯ
ಕರದಿ ಕಪ್ಪರವ ಕೊಡಲಾಗಿ
ಮೆರೆಸಿದರಿಲ್ಲ ಧಾರುಣಿಯೊಳು||ಗುರಿತೋರಿ||
ನರನಾಗಿ ಪುಟ್ಟಿರಲು ನಾಮ
ವರವಾಗಿ ಸಿಕ್ಕಿಹುದು ನಿನ್ನ
ಕರುಣಾರಸವನು ಮನದೊಳಗೆ
ಸುರಿಸಯ್ಯ ಶರಣಜನಪಾಲ.||ಗುರಿತೋರಿ||
ಸಾರಿ ಸಾರಿ ಪೇಳುವೆನಯ್ಯ
ನಾರಾಯಣನ ನಾಮಜಪವು
ದುರಿತಭವ ತಾಪತ್ರಯವನು
ಪರಿಹರಿಪುದು ಅರೆಗಳಿಗೆಯೊಳು||ಗುರಿತೋರಿ||
ಉರಗಶಯನನ ನಂಬಿದರ್ಗೆ
ಉರಿದುಹೋದುದು ಪಾಪಂಗಳು
ಕರೆಕರೆದು ಮುಕ್ತಿ ಕೊಡುವಾತ
ವರದ ಮಾತರೀಶ ವಿಠ್ಠಲ.||ಗುರಿತೋರಿ||
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ