ಎಂಟು

 

ಸಾಗರದಿಂ ತೆಗೆದ ಬಿಂದು ನೀರ ಹನಿಯಂತೆ|

ಜಗದ ಜೀವಂಗಳ ನಡುವೆ ಇಹೆನಯ್ಯ ನಾನು||ಪ||


ಭಯವೇತರವು ಇಲ್ಲಿ|

ಹಯವದನ ಇರಲಾಗಿ|

ಕಾಯಜ ಪಿತನ ಕರುಣೆ|

ಕಾಯುತಿರಲು ಜಯವೆನಗೆ ನಿಶ್ಚಯವು||ಸಾಗರದಿಂ||


ಯೋನಿ ಸಾವಿರ ದಾಟಿ|

ಮಾನವ ಜನ್ಮದೊಳಗೆ|

ಜ್ಞಾನಿಯೆನಿಸಿದೆಯೆನ್ನ|

ಅನುದಿನವು ಬೇಡುವೆನು ಪಾಲಿಸೆಂದು||ಸಾಗರದಿಂ||


ಗುಣಗಳೆಲ್ಲವ ಮರೆತು|

ಹಣದಾಸೆಯೊಳ್ ಬಿದ್ದು|

ಮಣ ಪಾಪದ ಭಾರದಿ|

ಕಾಣದಾಯಿತು ದಾರಿ ವೇಣುಲೋಲ||ಸಾಗರದಿಂ||


ಬಿಂದು ಬಿಂದು ಸೇರಿಸಿ|

ಒಂದುಗೂಡಿಸಿ ಇಂದು|

ಅಂದದಿ ಸಲಹುವಾತ|

ತಂದೆ ಮಾತರೀಶ ವಿಠಲನಲ್ಲವೆ||ಸಾಗರದಿಂ||





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು