ಒಂಬತ್ತು
ಬಿಸಿಲ ಬೇಗೆಗೆ ಮರದಡಿ ಆಸರೆಯಂತೆ
ವಾಸುದೇವನಾಸರೆ ಇಂದು ಎನಗಿಹುದು||ಪ||
ತಂದೆ ತಾಯಿಯು ಇರಲಿಲ್ಲ|
ಬಂಧು ಬಳಗವು ಬರಲಿಲ್ಲ|
ಮುಂದೆ ಬಂದೆನ್ನ ಸಲಹಿದ|
ಕಂದರ್ಪಜನಕನೊಬ್ಬನೆ ಗತಿಯೆಂಬೆ||ಬಿಸಿಲ||
ಮಿತ್ರಶತ್ರುಗಳಾರಿಲ್ಲ|
ಸತಿ ಸುತಾದಿಗಳಿರಲಿಲ್ಲ|
ಮತ್ತೆ ಸಹಪಾಠಿಗಳಿಲ್ಲ|
ಕತೃ ಸಿರಿ ಹರಿಯೊಬ್ಬನೇ ಗತಿಯೆಂಬೆ||ಬಿಸಿಲ||
ಸದ್ಯದಿ ಜೊತೆಯಾದರಿಲ್ಲ|
ವಿದ್ಯೆಯನು ಕೊಟ್ಟವರಿಲ್ಲ|
ವೈದ್ಯತ್ವ ಮಾಡಿದರಿಲ್ಲ|
ಮಧ್ವಗೊಲಿದ ರಂಗವಿಠಲ ಗತಿಯೆಂಬೆ||ಬಿಸಿಲ||
ಮಾತು ಕೊಟ್ಟವರಿಂದಿಲ್ಲ|
ಸೋತು ಹೋಗಲು ಯಾರಿಲ್ಲ|
ಆತುಕೊಂಡವ ಈ ಜಗದಿ|
ಮಾತರೀಶ ವಿಠಲನೊಬ್ಬ ಗತಿಯೆಂದೆ||ಬಿಸಿಲ||
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ