ಐದು
ಹರಿ ಮೆಚ್ಚುವ ಕೆಲಸ ಮಾಡಬೇಕು||ಪ||
ನರಜನ್ಮ ಪಡೆದ ಮೇಲೆ||
ಸಿರಿ ಮಾತರಿ ಪುರಕೆ ಬರಲುಬೇಕು|
ಧಾರುಣಿಯೊಳಿದ್ದ ಮೇಲೆ||ಅ.ಪ||
ವೈಷ್ಣವತ್ವ ಸಾರಿದಾತ
ವಿಷ್ಣು ಪದವ ತೋರಿದಾತ
ಅಷ್ಟ ಮಠವ ಮಾಡಿದಾತ
ಕೃಷ್ಣ ಮೂರುತಿ ಒಲಿದ ಮಧ್ವಪತಿಯಂತೆ||ಹರಿ ಮೆಚ್ಚುವ||
ಸೋದೆ ಮಠವ ನೋಡಿದಾತ
ಮಧ್ವಮತವ ಸಾರಿದಾತ
ಆದರಿಸಿ ಭೂತರಾಜಗೆ
ಒದಗಿ ಬಂದಿಹ ವಾದಿರಾಜ ಮುನಿಯಂತೆ||ಹರಿ ಮೆಚ್ಚುವ||
ತುಂಗ ತಟದಲಿ ನಿಂತಾತ
ಮಂದ ಮತಿಗಳ ಪೊರೆದಾತ
ಚಂದ್ರ ರಾಮನ ಭಜಿಸುವತಿ
ಯಂದದ ರಾಘವೇಂದ್ರಯತಿ ರಾಜನಂತೆ ||ಹರಿ ಮೆಚ್ಚುವ||
ದಾಸ ಕನಕ-ಪುರಂಧರರೊಳು
ಸಾಸಿರ ನಾಮ ಪಾಡಿಸುತ
ವಸುದೆಯೊಳಗೆ ಪೊರೆಯುತಿರುವ
ಈಶ ಮಾತರೀಶವಿಠಲನ ನೆನೆಯುತಲಿ||ಹರಿ ಮೆಚ್ಚುವ||
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ