ನಲವತ್ತೇಳು
ಪಾಡಿದರು ಮಂಗಳವ|ಕೂಡಿ ನಾರಿಯರೆಲ್ಲ||ಪ||
ಸಡಗರದಿ ಒಡೆಯ ಶ್ರೀಕೃಷ್ಣ ಸಲಹೆಂದು||ಅ.ಪ||
ಮಡುವಿನೊಳಿದ್ದ ಮಚ್ಚಕ ರೂಪನಿಗೆ|
ಪಿಡಿದು ಬೆಟ್ಟವ ಬೆನ್ನೊಳು ಪೊತ್ತವಗೆ|
ಪೊಡವಿಯ ದಾಡೆಯೊಳೆತ್ತಿ ಪಿಡಿದವಗೆ|
ಒಡೆದು ಕಂಬದಿ ಪ್ರಕಟವಾದವಗೆ||ಪಾಡಿದರು||
ಅಡಿಯ ರಕ್ಕಸನ ಶಿರದಿಯಿಟ್ಟವಗೆ|
ಕೊಡಲಿಯ ಪಿಡಿದು ನೃಪರ ಕಡಿದವಗೆ|
ಮಡಿಯನ್ನುಟ್ಟು ಕಾಡನು ಸೇರಿದಗೆ|
ಗಡಿಗೆಯನೊಡೆದು ಬೆಣ್ಣೆಯ ಕದ್ದವಗೆ|ಪಾಡಿದರು|
ಒಡನೆ ತ್ರಿಪುರಾಸುರರ ತರಿದವಗೆ|
ಕಡೆಯೊಳು ವಾಜೀಯ ತಾನೇರಿದಗೆ|
ಬಿಡದೆಹತ್ತವತಾರದೊಳು ಪೊರೆಯುವ|
ಒಡೆಯ ಸಿರಿ ಮಾತರೀಶ ವಿಠಲನಿಗೆ||ಪಾಡಿದರು||
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ