ಆರು

 

ತನುವಿನೊಳಗೆ ತಮವನುದಿನವಿದ್ದರೆ|

ಹಣತೆ ಸಾವಿರ ಹಚ್ಚಿದರೇನು ಫಲ?

ಮನದೊಳು ಹರಿವಾಸ ಮಾಡದಿದ್ದರೆ|

ಗುಣಂಗಳನೇಕವಿದ್ದರೇನು ಫಲ?


ನೂರು ವಿದ್ಯೆಯ ಕಲಿತು|

ಕರುಣೆಯೆಂಬುದಿರದಿರಲೇನು ಫಲ?

ಮಾರುದಾರಿಯ ದಾಟಿ|

ಊರ ತಾ ಸೇರದಿರಲೇನು ಫಲ?


ಬೆಳೆಯನು ಬೆಳೆಯಲಾಗಿ|

ಕಳೆಯೊಂದ ಕೀಳದಿರಲೇನು ಫಲ?

ತೊಳೆಯದಿರೆ ಮನದ ಕೊಳೆ|

ಹೊಳೆಯೊಳು ಮುಳುಗು ಹಾಕಲೇನು ಫಲ?


ಹತ್ತು ಬಂಧುಗಳಿರಲು|

ಎತ್ತಿಕೊಂಡವರ ಮರೆತರೇನು ಫಲ?

ಮುತ್ತು ಕೊಡುವಳ ಕಂಡು|

ತುತ್ತು ಕೊಟ್ಟಳ ಮರತರೇನು ಫಲ?


ಎಲ್ಲ ಜೀವವ ತಿಂದು|

ಸೊಲ್ಲು ವೇದಗಳ ಓದಲೇನು ಫಲ?

ಕಳ್ಳತನವನು ಮಾಡಿ|

ಒಳ್ಳೆಯ ದಾನ ಮಾಡಲೇನು ಫಲ?


ಬಿರಿದ ದೋಣಿಯನೇರಿ|

ಭರದ ನದಿಯನು ದಾಂಟಲೇನು ಫಲ?

ಕೊರಳು ನದಿಯೊಳ್ ಮುಳುಗಿ|

ಬಾರದಿದ್ದರೆ ಈಜಲೇನು ಫಲ?


ಯತಿ ಮಧ್ವಪತಿಯನ್ನು|

ಸ್ತುತಿಸದ ಜನ್ಮವಿದ್ದರೇನು ಫಲ?

ಕತೃ ಹರಿಯ ನೆನೆಯದೆ|

ನಿತ್ಯಮೋಕ್ಷವ ಬೇಡಲೇನು ಫಲ?


ಸತ್ವ ಸಾರದಿಂದಲಿ|

ಅತಿಹಿತವ ಮಾಡಿ ಸತತ ಪೊರೆವುದು|

ನಿತ್ಯ ಮೂರುತಿ ನಮ್ಮ|

ಮಾತರೀಶ ವಿಠಲನ ನಾಮಬಲ.|



.










ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು