ಅರವತ್ತೊಂಬತ್ತು

 

ದಾರಿಯ ಕಾಯುತಿರುವ | ವರ ಪ್ರಹ್ಲಾದರಾಯ |

ನರಹರಿ ಬರುವನೆಂದು ||ಪ ||

ಬಿರಿದು ಕಂಬದೊಳಿಂದ | ನರಸಿಂಹ ತಾ ಬಂದ |

ತರಳನ ಪೊರೆಯಲೆಂದು || ಅ.ಪ ||

ಊರೆಲ್ಲ ತಿರುಗಾಡಿ | ಸುರರೊಡೆಯ ಶ್ರೀ ಹರಿಯ |

ಬಿರುದನು ಪಾಡಲೆಂದು |

ನಾರಾಯಣ ನಾಮವ | ನಿರತದಿಂದ ನುಡಿಯುವ |

ನಾರದ ಮುನಿಪ ಬಂದು || ದಾರಿಯ ||

ಅಗಣಿತ ಮಡುವಿನೊಳಗೆ | ಕೂಗುತಿರಲು ಕರಿರಾಜ |

ಬಗೆಯೊಳು ಬರಲುಯೆಂದು |

ಹಗೆಯಿಂದ ಕಾಲ್ಪಿಡಿದ | ನೆಗಳ ಕೊರಳನು ಹರಿದ |

ಬೇಗದಿ ಹರಿಯು ಬಂದು || ದಾರಿಯ ||

ಭಕ್ತಗಡಣ ಸೇರಿತು | ಯುಕ್ತರೀತಿಯಿಂದಲಿ |

ಭಕ್ತಿಯ ಮಾಡಲೆಂದು  |

ಶಕ್ತದೈವರಗಂಡ | ಮಾತರೀಶ ವಿಠಲನು |

ಮುಕ್ತಿಯ ನೀಡಲೆಂದು || ದಾರಿಯ ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅರುವತ್ತಾರು

ಅರವತ್ತೇಳು

ಎಪ್ಪತ್ತೊಂದು