ಹದಿನೇಳು
ಕರೆದಾಗ ಬರಬಾರದೇ
ಸುರಮುನಿ ಪೂಜಿತ ನಾರದ ವಂದ್ಯ||ಪ||
ಕರೆದಾಗ ಬಂದಕ್ಕರೆಯಲಿ
ಕರಿರಾಜನ ಪೊರೆದ ಶ್ರೀಹರಿಯೇ||ಅ.ಪ||
ತರುಣಿ ಮೊರೆಯಿಡಲು ಭರದಲಿ
ಹರಸಿ ನಾರಿಗೆ ಅಕ್ಷಯದ
ಸೀರೆಯನ್ನಿತ್ತ ಕರುಣಾಕರನೆ||ಕರೆದಾಗ||
ತರಳ ಧ್ರುವರಾಯ ಕರೆಯೆ
ಕರುಳ ಬೆರಳಿನೊಳು ಬಗೆದತಿ
ದುರುಳ ದೈತ್ಯನ ತರಿದ ನರಹರಿಯೆ||ಕರೆದಾಗ||
ಬಲಿ ಸುಗ್ರೀವ ವಿಭೀಷಣರ
ಸಲುಗೆಯಿಂದಲಿ ಬಳಿಬಂದು
ಒಲಿದು ಬಲು ಮೆರೆಸಿ ಪಾಲಿಸಿದ ಹರಿ||ಕರೆದಾಗ||
ಹರಿವಾಯು ರೂಪದಿ ಮಧ್ವ
ಗುರುರಾಯರ ಕರುಣೆಯಿಂದ
ಪೊರೆದವ ಮಾತರೀಶ ವಿಠಲ ಹರಿ||ಕರೆದಾಗ||
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ