ಇಪ್ಪತ್ತೆಂಟು
ಅರಿವಿನೊಳಗಿರುವ ದೈವ|
ಬರವಿನೊಳು ಬರಬಾರದೆ||ಪ||
ಶಾರದಾ ದೇವಿ ನಿನಗೆ|
ಕರುಣೆಯು ಎನ್ನೊಳಿಲ್ಲವೆ||ಅ.ಪ||
ಕರವಮುಗಿಯುವೆನು ನಿನಗೆ|
ಶಿರ ಬಾಗಿ ಚರಣಗಳಿಗೆ|
ಮರೆವು ನೀಗಿ ಜ್ಞಾನವನು|
ಎರೆಯಬೇಕು ಮನದೊಳಗೆ||ಅರಿವಿನೊಳಗೆ||
ಪಾಮರರ ಬಾಯಿಯೊಳಗೆ|
ನಾಮ ಸಾವಿರವ ನುಡಿಸಿ|
ಕಾಮ ಮೋಹಗಳ ಬಿಡಿಸಿ|
ಯಾಮ ಯಾಮದೊಳಗೆನ್ನ||ಅರಿವಿನೊಳಗೆ||
ಘೋರ ಪಾಪಗಳ ಮಾಡಿ|
ನರಕ ತಾಪದಲಿ ಬಾಡಿ|
ಉರಿದು ಕೆಡುವುದಕೆ ಮೊದಲು|
ಸಿರಿ ಮಾತರೀಶ ವಿಠಲ||ಅರಿವಿನೊಳಗೆ||
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ