ಐವತ್ತ ಮೂರು

 

ಕರಮುಗಿದು ಬಿನ್ನಪವು|

ಪರಶುರಾಮ ಮುನಿಪನ ಚರಣದೊಳು|

ಶರಣೆಂಬೆನೊ ಭವ ಋಣ|

ಭಾರ ಕಳೆ ಹರಿ ಋಷಿವೇಷಧರನೆ||ಪ||


ಜಮದಗ್ನಿ ರೇಣುಕೆಯ ಮಗನಾಗಿ|

ರಾಮ ಭಾರ್ಗವನೆನಿಸಿ ಮೆರೆದೆಯೊ|

ಸೋಮ ಸಹಸ್ರ ಕ್ಷಾತ್ರ ತೇಜದಿ|

ವಾಮ ಮಾರ್ಗದರಸರನು ತರಿದು|

ಭೂಮಿಯತಿ ಭಾರವ ಕಳೆದವಗೆ||ಕರ||


ಮಂಡೆ ಮೇಲಿನ ಉಂಡೆಜಡೆ ಹರಡಿ

ಕೆಂಡಗಣ್ಣಿನ ನೋಟವ ಬೀರುತ

ದಂಡ ಪರಶು ಚಾಪ ಪಾಣಿಯಾಗಿ

ಭಂಡ ನೃಪರನು ತುಂಡು ಮಾಡುತ

ಗಂಡುಗಲಿ ರೂಪ ತೋರಿದವನಿಗೆ||ಕರ||


ಪಿತನ ವಾಕ್ಯವ ನಡೆಸಲುಯೆಂದು|

ಮಾತೆ ಶಿರವನು ಕೊಡಲಿಯಲಿ ಕಡಿದ|

ಸುತನ ಮೆಚ್ಚಿ ಪಿತ ವರವೀಯಲಿಕೆ|

ಮತ್ತೆ ಮಾತೆಯನು ವರದೊಳು ಪಡೆದ|

ಮಾತರೀಶ ವಿಠಲನ ಪ್ರಿಯನೊಳು||ಕರ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು