ಅರುವತ್ತ ನಾಲ್ಕು
ಅಂತರಂಗದಿ ಅವಿತಿರುವ|
ಸಂತ ನೀನೆದ್ದು ಬಾರಯ್ಯ||ಪ||
ಚಿಂತೆಯೆಂಬುದ ನೀಗಿ|
ಕಂತು ಪಿತನ ತೋರಯ್ಯ||ಅ.ಪ||
ಮಲಿನವಾಗಿಹ ಮೈಯ|
ಜಲದೊಳು ತೊಳೆದರೆ ಸಲೆ|
ಕೊಳೆತು ನಾರೊದಲ್ಲದೆ|
ಮಲವೆಂಬುದಿಂಗದು|| 1 ||
ಒಳಮನವ ಭಕ್ತಿಯಲಿ|
ತೊಳೆದು ಮಜ್ಜನ ಮಾಡಿ|
ಹೊಳೆವ ಪಾದ ನೆನೆಯಲು|
ಕಳೆಯವುದು ಪಾಪಗಳು|| 2 ||
ಅನುದಿನದಿ ನೀಯೆನ್ನ|
ಮನಮಂದಿರದಿ ನೆಲೆಸಿ|
ತನುವ ನೇಗಿಲು ಮಾಡಿ|
ಮನಸಜ ಪಿತನ ತೋರು|| 3 ||
ಉತ್ತಿ ಹದವನು ಮಾಡಿ|
ಬಿತ್ತು ಭಕ್ತಿಯ ಬೀಜ|
ಮಾತರೀಶ ವಿಠಲನ|
ಸತ್ಯ ದರ್ಶನ ಮಾಡೊ|| 4 ||
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ