ಮೂವತ್ತೆಂಟು
ಅಂದಿಗೆ ಅದು ಸುಖವು,|
ಇಂದಿಗೆ ಇದು ಸುಖವು||
ಎಂದೆಂದಿಗೂ ಹರಿಪಾದ ಭಜನೆ ಸುಖವು||
ಅಂದಿಗೆ ಸುಖವಾಯ್ತು,|
ಚಂದದ ಜಯವಿಜಯರ್ಗೆ|
ಮುಂದೆ ರಕ್ಕಸ ಜನ್ಮ, |
ಅಂದವಾಯ್ತದರಿಂದ||ಅಂದಿಗೆ||
ಅರಮನೆ ಅಂದವಾಯ್ತು, |
ವರ ವಿಭಿಷಣಗಂದಿಗೆ|
ಶ್ರೀರಾಮಚಂದ್ರಮನ, |
ಚರಣ ಒಲಿಯಿತಿಂದಿಗೆ||ಅಂದಿಗೆ||
ಸತ್ಯವಾದಿಗಂದಿಗೆ|
ಇತ್ತೆ ರಾಜ ಸುಯೋಗ|
ಮತ್ತೆ ಮಸಣ ಕಾಯಿಸಿ|
ಒತ್ತೆಯಿರಿಸಿದರಿಂದ||ಅಂದಿಗೆ||
ಪುಟ್ಟಿಸಿದ ಮೇಲೆ ತಾ|
ಗಟ್ಟಿಯಲಿ ರಕ್ಷಿಪನು|
ಚಿತ್ತದೊಲ್ಲಭ ನಮ್ಮ|
ಮಾತರೀಶ ವಿಠ್ಠಲ||ಅಂದಿಗೆ||
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ