ಇಪ್ಪತೈದು

 

ಇಂದಿನ ದಿನ ಬರಲೆಂದು ನಾ

ನೆಂದಿನಿಂದ ಕಾಯುತಲಿದ್ದೆ

ಇಂದಿರಾರಮಣನ ಒಲುಮೆಯು

ಇಂದೆನಗಾಯಿತು ಶ್ರೀ ಹರಿಯೆ||ಇಂದಿನ||


ಎಳೆ ನಾರಿಕೇಳದಭಿಷೇಕ

ಹಾಲು ಗಂಧ ಚಂದನ ಸುರಿಸಿ

ಚೆಲುವ ಮೂಲ ಬಿಂಬವ ಕಂಡು

ಎಳೆ ತುಳಸಿಯ ದಳವನ್ನಿಡಲು||ಇಂದಿನ||


ಬಣ್ಣಬಣ್ಣದಂಚಿನೊಳೆಸೆವ

ನುಣ್ಣನೆಯ ವಸನವನು ತೊಡಿಸಿ

ಎಣ್ಣೆ ಬತ್ತಿಯನಿಟ್ಟು ದೀಪ

ಕಣ್ಣ ತುಂಬಿಹ ಮೂರುತಿಯೇ||ಇಂದಿನ||


ಮಾಲೆ ತುಳಸಿ ಹೂವಿನ ಹಾರ

ಎಲೆ ಕ್ರಮುಕ ಹರಿವಾಣದೊಳು

ಸಾಲುದಂಡೆ ಹಾಲು ಪಾಯಸ

ಎಲೆಯೊಳಂದದಲಿ ಬಡಿಸಿಡಲು||ಇಂದಿನ||


ಹೆಂಗಳೆಯರೆಲ್ಲ ಸೇರಿ ಪಾಡಿ

ರಂಗ ಮಾತರೀಶ ವಿಠಲಗೆ

ಮಂಗಳಾರತಿ ಬಿಡದೆ ಮಾಡಿ

ಕಂಗಳಿಗಾನಂದ ನೋಡಲು||ಇಂದಿನ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು