ಇಪ್ಪತ್ತೇಳು
ವಿದ್ಯೆಯ ಪಡೆಯಬೇಕು|
ಸಾಧು ಸಜ್ಜನರೆಲ್ಲ|
ಕ್ರೋಧ ಮದ ಮತ್ಸರವ|
ಒದ್ದು ಓಡಿಸುವಂಥ||ವಿದ್ಯೆಯ||
ಉದರ ಪೋಷಣೆ ಮಾಡಿ|
ಮಧುರ ಜೀವನವೆನುತ|
ಸಾಧನವ ಮರೆಯುತಲಿ|
ಮಾಧವನ ನೆನೆವಂಥ||ವಿದ್ಯೆಯ||
ಮಡದಿ ಮಕ್ಕಳ ಮೆರೆಸಿ|
ನಡೆಯುತ ಭವದೊಳಲೆದು|
ಕಡೆಗಾಲಕೆ ಮುಕ್ತಿಯ|
ಪಡೆಯಲು ಒದಗುವಂಥ||ವಿದ್ಯೆಯ||
ಕಷ್ಟ ಪಡದೆಲೆ ದುಡಿದು|
ನಷ್ಟ ಪಡುತಲಿ ಹಿರಿದು|
ಅಷ್ಟು ದುಡಿಮೆಯ ಕಳೆದು|
ಕೃಷ್ಣ ಮೂರ್ತಿಯ ನೆನೆವ||ವಿದ್ಯೆಯ||
ಹಾದರಕೆ ಹಾತೊರೆದು|
ಮೋದದಿಂ ಬಲು ಮೆರೆದು|
ವೇದನೆ ಪಡುವ ಮೊದಲು|
ಮಾಧವನ ನೆನೆವಂಥ||ವಿದ್ಯೆಯ||
ಮಾತುಮಾತಿಗೆ ತಪ್ಪಿ|
ಸತತ ಪಾಶಕೆ ಸಿಲುಕಿ|
ಸೋತು ಹೋಗುವ ಮುನ್ನ|
ಮಾತರೀಶನ ನೆನೆವ||ವಿದ್ಯೆಯ||
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ