ಏಳು

 

ಹರಿವ ನದಿಗಳೆಲ್ಲವು 

ಶರಧಿಯ ಸೇರುವಂತೆ

ಗುರು ತೋರಿದಾ ದಾರಿಯಲಿ

ಹರಿಪದವ ಸೇರುವುದು.||ಪ||


ಮಂದಮತಿಗಳು ಕೇಳಿ

ಅಂದದಲಿ ಪೇಳುವೆನು

ಇಂದಿರಾ ಪತಿಯ ಒಲಿಸಲು

ಇಂದು ಶುಭದಿನವಂತೆ.||ಹರಿವ||


ಕಟುಕರೆಲ್ಲರು ಕೇಳಿ

ಹಟಮಾರಿಗಳು ಕೇಳಿ

ವಟು ವಾಮನನ ಸೇವೆಗಿದು

ಚುಟುಕಿನಾ ದಿನವಂತೆ.||ಹರಿವ||


ಸಾಧು ಜನರಿದ ಕೇಳಿ

ಉದಾಸೀನ ಮಾಡದೆ

ಪದುಮನಾಭನನು ಒಲಿಸಲು

ಇದುದಿನವು ಶುಭವಂತೆ.||ಹರಿವ||

 

ಕಡುಗೋಪಿಗಳು ಕೇಳಿ

ಬಡವಾದವರು ಕೇಳಿ

ತಡೆಬಡೆಯಿರದೆ ಹರಿನಾಮ

ಪಾಡಲತಿ ಶುಭವಂತೆ.||ಹರಿವ||


ಕಡೆಗಾಲದೊಳು ತಾನು

ಒಡನೆ ಒದಗುವೆನೆಂದು

ಒಡೆಯ ಮಾತರೀಶ ವಿಠಲ

ಬಿಡದೆ ಸಲಹುವನೆಮ್ಮ.||ಹರಿವ||




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು